ಮೂರನೇ ಪೀಠದ ಬಗ್ಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ, ‘ಇದು ನಿರಾಣಿ ಪೀಠ’, ಅವರ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂಬ ಮಾತಿಗೆ ಉತ್ತರಿಸಿದ ಅವರು, ‘ಸ್ವಾಮಿಜೀಗಳನ್ನು, ಪೀಠವನ್ನು ನಮ್ಮ ಸ್ವಂತಕ್ಕಾಗಲಿ, ರಾಜಕೀಯಕ್ಕಾಗಲಿ ಬಳಸಿಕೊಂಡಿಲ್ಲ, ಯತ್ನಾಳ ಕುಡಿದ ನಶೆಯಲ್ಲಿ ಮಾತನಾಡುತ್ತಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ನಾವು ಸಣ್ಣವರಾಗುವುದಿಲ್ಲ’ ಎಂದರು. ಬೆಂಡವಾಡ ರೇವಣಸಿದ್ಧೇಶ್ವರ ಶ್ರೀಗಳು, ಆಲಗೂರ ಧರಿದೇವರ ಶ್ರೀಗಳು ಇದ್ದರು.