ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಖವಾಗಿರುವ ಸ್ವಾಮೀಜಿಗಳಿಗೆ ಬಡವರ ಕಷ್ಟಗಳು ಗೊತ್ತಾಗುವುದಿಲ್ಲ. ಹೀಗಾಗಿ, ಅವರು ಸರ್ಕಾರದ ಮೇಲೆ ಮೀಸಲಾತಿಗೆ ಒತ್ತಡ ಹಾಕುವ ಪ್ರಯತ್ನ ಮಾಡುವುದಿಲ್ಲ. ನಿಧಾನವಾಗಿಯೇ ಸರ್ಕಾರ ಮೀಸಲಾತಿ ನೀಡಲಿ ಎನ್ನುವ ಧೋರಣೆ ಅವರದ್ದು’ ಎಂದುವಚನಾನಂದ ಸ್ವಾಮೀಜಿ ಹೆಸರು ಪ್ರಸ್ತಾಪಿಸದೆಯೇ ಅಸಮಾಧಾನ ವ್ಯಕ್ತಪಡಿಸಿದರು.