ಈ ಬಗ್ಗೆ ಮಾತನಾಡಿದ ಯುವಕ ಅವಿನಾಶ್, ‘ಹರ್ ಘರ್ ತಿರಂಗಾ’ ಘೋಷಣೆ ಮೂಲಕ ಮನೆಗಳ ಮೇಲೆ ಧ್ವಜ ಹಾರಿಸಲು ಕರೆ ನೀಡಲಾಗಿದೆ. ನಮಗೆ ಮನೆ ಇಲ್ಲದ ಕಾರಣ ನಾವು ಅಡಿಪಾಯದ ಮೇಲೆ ಬಾವುಟ ಹಾರಿಸಿದ್ದೇವೆ. ಇದು ಯಾರ ವಿರುದ್ಧ ಪ್ರತಿಭಟನೆ ಅಥವಾ ಧ್ವಜಕ್ಕೆ ಅಗೌರವ ಅಲ್ಲ. ನಮ್ಮ ದೇಶಭಕ್ತಿಯನ್ನು ನಾವು ತೋರಿಸುತ್ತಿದ್ದೇವೆ ಅಷ್ಟೇ’ ಎಂದರು.