ಪ್ರಸಾದದ ಕಿಟ್ವೊಂದಕ್ಕೆ ₹ 450 ನಿಗದಿಪಡಿಸಲಾಗಿದೆ. ‘ಸ್ವಾಮಿ ಪ್ರಸಾದಂ’ ಹೆಸರಿನ ಈ ಕಿಟ್ನಲ್ಲಿ ಒಂದು ಪ್ಯಾಕೆಟ್ ‘ಅರವಣ’ ಪಾಯಸ, ತುಪ್ಪ, ಅರಿಶಿನ–ಕುಂಕುಮ, ವಿಭೂತಿ ಹಾಗೂ ಅರ್ಚನೆಯ ಪ್ರಸಾದ ಇರಲಿದೆ.ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಸಿದ್ಧವಾದ ಪ್ರಸಾದವನ್ನು ಸ್ಪೀಡ್ ಪೋಸ್ಟ್ ಮೂಲಕ ಗರಿಷ್ಠ ಹತ್ತು ದಿನಗಳ ಒಳಗೆ ಭಕ್ತರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಪ್ರಸಾದವನ್ನು ಬುಕ್ ಮಾಡಲು ಹತ್ತಿರದ ಅಂಚೆ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಅಂಚೆ ಇಲಾಖೆಯ ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ತಿಳಿಸಿದ್ದಾರೆ.