ಬೆಂಗಳೂರು: ನಗರದ ಅರಮನೆ ಮೈದಾನ ಸಮೀಪದ ಜಯಮಹಲ್ ಹೋಟೆಲ್ ಬಳಿ ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಹಮ್ಮಿಕೊಂಡಿರುವ 12ನೇ ಆವೃತ್ತಿಯ ಎಡ್ಯುವರ್ಸ್ಜ್ಞಾನದೇಗುಲಕ್ಕೆ ಶನಿವಾರ ಚಾಲನೆ ಸಿಕ್ಕಿತು.
ಬಂಜಾರ ಅಕಾಡೆಮಿ ಅಧ್ಯಕ್ಷ ಅಲಿ ಖ್ವಾಜಾ ಅವರು ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ವಿವಿಧ ಕಲಿಕಾ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಕಾಮೆಡ್ ಕೆ ಬಗ್ಗೆ ಪ್ರಾಧ್ಯಾಪಕ ಪ್ರೊ.ಶಾಂತಾರಾಂ ಹಾಗೂ ಸಿಇಟಿ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ ಮೂರ್ತಿ ಮಾಹಿತಿ ನೀಡಿದರು. ನೂರಾರು ವಿದ್ಯಾರ್ಥಿಗಳು, ಅವರ ಪೋಷಕರು ಪಾಲ್ಗೊಂಡಿದ್ದಾರೆ.
100ಕ್ಕೂ ಅಧಿಕ ಮಳಿಗೆಗಳು ವಿವಿಧ ಕಾಲೇಜುಗಳಲ್ಲಿನ ಕಲಿಕಾ ಅವಕಾಶಗಳನ್ನು ತಿಳಿಸಿಕೊಡುತ್ತಿವೆ. ಭಾನುವಾರ ಸಂಜೆಯವರೆಗೆ ಇದು ಮುಂದುವರಿಯಲಿದೆ. ವಿವಿಧ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡಲಿದ್ದಾರೆ.