ಶಿರಾ ತಾಲ್ಲೂಕಿನ ಬುವನಹಳ್ಳಿಯಲ್ಲಿ ಶಾಸಕ ಬಿ.ಸತ್ಯನಾರಾಯಣ ಪುಣ್ಯತಿಥಿ ಕಾರ್ಯಕ್ರಮವನ್ನು ಗುರುವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಪ್ರಜ್ವಲ್ ಅವರನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಸ್ವಾಗತಿಸಿದರು. ಈ ವೇಳೆ ಅಲ್ಲಿಗೆ ಬಂದ ವೀರಭದ್ರಯ್ಯ ಅವರು ಪ್ರಜ್ವಲ್ ಕಾಲು ಮುಟ್ಟಲು ಬಾಗಿದರು. ಆಗ ಪ್ರಜ್ವಲ್ ‘ಚೆನ್ನಾಗಿದ್ದೀರ ಅಣ್ಣ’ ಎಂದು ಅವರ ಜತೆ ಮಾತನಾಡುತ್ತ ತೆರಳಿದರು.