‘ಪಾವಗಡದಲ್ಲಿ ಬಸ್ ಅಪಘಾತವಾದಾಗ ಸಿಎಂ ಬಸವರಾಜ ಬೊಮ್ಮಾಯಿ 'ಚಾರ್ಲಿ' ಚಿತ್ರ ನೋಡಲು ತೆರಳಿದ್ದರು. ಹುಬ್ಬಳ್ಳಿಯಲ್ಲಿ ಮಳೆ ಅವಾಂತರವಾದಾಗ ಶಾಸಕ ಜಗದೀಶ್ ಶೆಟ್ಟರ್ ಸಿನೆಮಾವೊಂದರ ಪ್ರಚಾರಕ್ಕೆ ತೆರಳಿದ್ದರು. ಅವರದೇ ಪಕ್ಷದ ಕಾರ್ಯಕರ್ತನ ಚಿತೆ ಉರಿಯುವಾಗ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಿನೆಮಾ ನೋಡಿಕೊಂಡು ಮೋಜು ಮಾಡುತ್ತಿದ್ದಾರೆ. ಬಿಜೆಪಿಗೆ ಜನತೆ ಮುಖ್ಯವಲ್ಲ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.