ಈ ವಿಚಾರವಾಗಿ ಸರಣಿ ಟ್ವೀಟ್ ಮಾಡಿರುವ ಅವರು, ‘ಕರ್ನಾಟಕದಂತಹ ಆದಾಯ ತರುವ ರಾಜ್ಯಗಳು ಉತ್ತರ ಪ್ರದೇಶದಂತಹ ರಾಜ್ಯಗಳನ್ನು ಸುಭಿಕ್ಷವಾಗಿರುವಂತೆ ನೋಡಿಕೊಳ್ಳುತ್ತಿವೆ. ಆದರೂ, ದ್ವೇಷದ ರಾಜಕಾರಣ ಉತ್ತರ ಪ್ರದೇಶವನ್ನು ಹಿಂದುಳಿಸಿದೆ. ಇತರ ರಾಜ್ಯಗಳ ಮೇಲೆ ಅವಲಂಬಿತವಾಗುವಂತೆ ಮಾಡಿದೆ. ಕರ್ನಾಟಕ ಶಾಂತಿಯುತ ಮತ್ತು ಪ್ರಗತಿಪರವಾಗಿರುವ ಕಾರಣ 2 ನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದೆ’ ಎಂದು ಹೇಳಿದ್ದಾರೆ.