ನಗರದಲ್ಲಿ ಬುಧವಾರ ಶಿಕ್ಷಣ ಸಚಿವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು, 15 ಜನರನ್ನು, ಎರಡು ವಾಹನಗಳನ್ನು ಈಗಾಗಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉಳಿದವರನ್ನು ಸಹ ಫೋಟೊ, ವಿಡಿಯೊ ಮಾಹಿತಿ ಪಡೆದು ವಶಕ್ಕೆ ಪಡೆಯಲಾಗುವುದು. ಸ್ಥಳೀಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಹೊರಗಿನವರು ವ್ಯವಸ್ಥಿತವಾಗಿ ಬಂದಿರುವುದನ್ನು ನೋಡಿದರೆ ಶಿಕ್ಷಣ ಸಚಿವ ನಾಗೇಶ್ ಅವರ ಪ್ರಾಣ ತೆಗೆಯುತ್ತಿದ್ದರೆನೋ ಎನ್ನುವಂತಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬರಲಿದ್ದು, ಸಚಿವರ ಮನೆಗೆ, ಸಚಿವರಿಗೆ ಸೂಕ್ತ ಭದ್ರತೆ ನೀಡಲಾಗುವುದು’ ಎಂದು ಹೇಳಿದರು.