‘ಶುಲ್ಕ ವಿಷಯದಲ್ಲಿ ಗುರುವಾರ (ಜ. 28) ಸಂಜೆಯೊಳಗೆ ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ 31ರಂದು ಹೋರಾಟ ನಡೆಸುವುದಾಗಿ ಬುಧವಾರವೇ ಗಡುವು ನೀಡಲಾಗಿತ್ತು. ಆದರೆ, ಈ ವಿಷಯದಲ್ಲಿ ಶಿಕ್ಷಣ ಇಲಾಖೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಖಾಸಗಿ ಶಾಲೆಗಳು ಶುಲ್ಕ ನಿಗದಿಪಡಿಸುವ ವಿಷಯದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದೂ ಸಮಿತಿ ದೂರಿದೆ.