‘ಗೃಹ ಇಲಾಖೆ ಅತ್ಯಂತ ಭ್ರಷ್ಟ. ಪೊಲೀಸರು ಎಂಜಲು ಕಾಸು ತಿಂದು ಬಿದ್ದಿದ್ದಾರೆ ಎಂದು ನೀವೇ ಹೇಳುತ್ತೀರಿ. ನಿಮ್ಮ ಅಧಿಕಾರಿಗಳ ಅಪಮಾನ ನೀವೇ ಮಾಡುತ್ತೀರಿ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಉದ್ದೇಶಿಸಿ ಹೇಳಿದ ಪ್ರಿಯಾಂಕ್, ‘ಅವರು ಕೆಟ್ಟ ಗೃಹಮಂತ್ರಿ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಉತ್ತಮ.545 ಹುದ್ದೆಗಳ ಪೈಕಿ, 300 ಮಂದಿ ಅಕ್ರಮವಾಗಿ ಆಯ್ಕೆಯಾಗಿದ್ದು, ಪ್ರತಿ ಅಭ್ಯರ್ಥಿಯಿಂದ ಕನಿಷ್ಠ ₹ 80 ಲಕ್ಷ ಪಡೆದಿದ್ದು, ಅಲ್ಲಿಗೆ ₹ 210 ಕೋಟಿ ಅವ್ಯವಹಾರ ನಡೆದಿದೆ’ ಎಂದು ದೂರಿದರು.