ಸುತ್ತೂರು (ಮೈಸೂರು ಜಿಲ್ಲೆ): ‘ಮತಾಂತರ ನಿಷೇಧ ಕಾಯ್ದೆಯಿಂದಲೇ ಮತಾಂತರ ತಪ್ಪಿಸಲು ಆಗುವುದಿಲ್ಲ. ಆಮಿಷಕ್ಕೆ ಒಳಗಾಗಿ ಮತಾಂತರಗೊಂಡವರನ್ನು ಮರಳಿ ಹಿಂದೂ ಧರ್ಮಕ್ಕೆ ಕರೆತರುವ ಕೆಲಸವನ್ನು ಮಠಗಳು ಮಾಡಬೇಕು’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಪ್ರತಿಪಾದಿಸಿದರು.
ಇಲ್ಲಿ ಶುಕ್ರವಾರ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಪ್ರಯುಕ್ತ ನಡೆದ ಮಠದ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ದಲಿತರು, ಅಶಕ್ತರು ಹಾಗೂ ನಿರಾಶ್ರಿತರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನೂ ಮಠಗಳು ಮಾಡಬೇಕು. ಹೆಚ್ಚಾಗಿರುವ ಮತಾಂತರ ಪಿಡುಗನ್ನು ಕೊನೆಗಾಣಿಸಲು ಸಮಾಜ ಜಾಗೃತಗೊಳ್ಳಬೇಕು. ಮತಾಂತರದ ವಿರುದ್ಧ ಜಾಗೃತಿ ಮೂಡಿಸಬೇಕು’ ಎಂದರು.