ಬೆಂಗಳೂರು: ಕನಿಷ್ಠ ವೇತನ ಬಿಡುಗಡೆಗೆ ಆಗ್ರಹಿಸಿ ಸೆ.22ರಂದು ವಿಧಾನಸೌಧ ಮುತ್ತಿಗೆ ಮತ್ತು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ಎಚ್.ಎನ್.ದೇವರಾಜ ತಿಳಿಸಿದ್ದಾರೆ.
ಗ್ರಾಮ ಸಹಾಯಕರ ಕನಿಷ್ಠ ವೇತನ ತಿಂಗಳಿಗೆ ₹21 ಸಾವಿರ ನಿಗದಿ ಮಾಡಬೇಕು. ಅಡ್ವೊಕೇಟ್ ಜನರಲ್ ವರದಿಯಂತೆ ಅವರನ್ನು ಡಿ ದರ್ಜೆ ನೌಕರರೆಂದು ಘೋಷಣೆ ಮಾಡಬೇಕು ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.