ಬೆಂಗಳೂರು: ವಿಧಾನಪರಿಷತ್ ಮಾಜಿ ಸದಸ್ಯರೊಬ್ಬರ ಸಂಬಂಧಿಕರಿಗೆ ಸೇರಿದ್ದ ಮರಳು ಬ್ಲಾಕ್ ಪಡೆದು, ಮರಳು ತೆಗೆದಿದ್ದ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಆರೋಪಿ ಸುರೇಶ ಕಾಟೇಗಾಂವ, ಬಳಿಕ ಹಣ ಕೊಡದಿರುವುದು ತಿಳಿದುಬಂದಿದೆ.
‘ನಿಮ್ಮವರ ಮರಳು ಬ್ಲಾಕ್ ನಾವೇ ನಿರ್ವಹಿಸುತ್ತೇವೆ. ಬಂದ ಹಣದಲ್ಲಿ ಪಾಲು ಕೊಡುತ್ತೇವೆ ಎಂದಿದ್ದ. ಹೆಚ್ಚೂ ಕಡಿಮೆ ₹ 1 ಕೋಟಿ ಬರಬೇಕಿದೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ತಮ್ಮ ಆಪ್ತರ ಬಳಿ ಅಲವತ್ತುಕೊಂಡಿದ್ದಾರೆ. ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ನೀಡಿದ್ದ ಆರೋಪದಲ್ಲಿ ಸುರೇಶ ಕಾಟೆಗಾಂವ ಮತ್ತು ಸಹೋದರ ಕಾಳಿದಾಸ ಸಿಐಡಿ ಬಂಧನದಲ್ಲಿದ್ದಾರೆ.