ಕಲಬುರಗಿ:ಪಿಎಸ್ಐ ಅಕ್ರಮ ನೇಮಕಾತಿ ವೇಳೆ ದಿವ್ಯಾ ಹಾಗರಗಿ ಬಳಸಿದ್ದ ಮೊಬೈಲ್ ಫೋನನ್ನು ಸಿಐಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಬಂಧನದ ವೇಳೆ ಹಳೆಯ ಮೊಬೈಲ್ ಫೋನ್ ಸಿಕ್ಕರೆ ಎಲ್ಲ ಮಾಹಿತಿ ಹೊರಬೀಳಲಿದೆ ಎಂದು ಗಾಬರಿಯಿಂದ ಮೊಬೈಲ್ ಬಿಸಾಕಿದ್ದರು. ಆದರೆ, ಧಾವಂತದಲ್ಲಿ ಬಿಸಾಕಿದ್ದ ಮೊಬೈಲ್ಅನ್ನು ಆಗಷ್ಟೇ ಖರೀದಿಸಿದ್ದರು. ಹಳೆಯ ಮೊಬೈಲ್ ಇವರ ಬಳಿಯೇ ಇತ್ತು. ಅದನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ.
ಬಂಧಿತ ವೈಜನಾಥ ಪತ್ನಿ ಜೈಲರ್! ಪಿಎಸ್ಐ ನೇಮಕಾತಿ ಹಗರಣದಲ್ಲಿ ಬಂಧಿತ, ಪ್ರಸ್ತುತ ಸಿಐಡಿ ವಶದಲ್ಲಿರುವ 6ನೇ ಕೆಎಸ್ಆರ್ಪಿ ಬಟಾಲಿಯನ್ನ ಸಹಾಯಕ ಕಮಾಂಡೆಂಟ್ ವೈಜನಾಥ ರೇವೂರನ ಪತ್ನಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲರ್ ಆಗಿದ್ದಾರೆ.
ಕೆಲ ವರ್ಷಗಳಿಂದ ಕಲಬುರಗಿ ಕಾರಾಗೃಹದಲ್ಲಿ ಜೈಲರ್ ಆಗಿದ್ದು, ಪ್ರಸ್ತುತ ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ ಹಾಗೂ ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರು ಬಂಧಿತರಾಗಿರುವ ಬ್ಯಾರಕ್ನ ಭದ್ರತಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.