ಅರ್ಜಿದಾರ ಶಿವಮೊಗ್ಗದ ಗಂಗಣ್ಣ ಮತ್ತು ಪ್ರತಿವಾದಿಗಳಲ್ಲಿ ಒಬ್ಬರಾದ ಎಚ್. ಜಯಪ್ಪ ನಡುವೆ ಬಹುದಿನಗಳಿಂದ ಭೂ ವ್ಯಾಜ್ಯ ನಡೆಯುತ್ತಿತ್ತು. ಗಂಗಣ್ಣ ಅವರ ಸ್ವಾಧೀನದಲ್ಲಿದ್ದ ಜಮೀನು ತಮಗೇ ಸೇರಬೇಕೆಂದು ಜಯಪ್ಪ, ಉಪವಿಭಾಗಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಉಪವಿಭಾಗಾಧಿಕಾರಿ, ಇಬ್ಬರೂ ಮಂಜೂರಾತಿದಾರರೇ ಆಗಿದ್ದು ಪಿಟಿಸಿಎಲ್ ಕಾಯ್ದೆ ಉಲ್ಲಂಘನೆಯಾಗಿಲ್ಲ ಎಂದು ತಿಳಿಸಿದ್ದರು.