‘ದೇಶವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದರೂ ಲಸಿಕಾ ಅಭಿಯಾನ ಮುಂದುವರಿಸುವ ಅಗತ್ಯ ಇದೆ’ ಎಂದ ಮುಖ್ಯಮಂತ್ರಿ, ‘ರೋಗಗಳ ನಿವಾರಣೆಯಲ್ಲಿ ಪ್ರಧಾನಿಯವರ ವೈಜ್ಞಾನಿಕ ಚಿಂತೆನೆಯೂ ಇದೆ. ಸ್ವಚ್ಛತೆಯಿಂದ ಹಲವು ರೋಗಳನ್ನು ದೂರ ಇಡಬಹುದು ಎಂಬ ಕಾರಣಕ್ಕೆ ಅವರು ಅದಕ್ಕೆ ಪ್ರಾಮುಖ್ಯತೆ ನೀಡಿ ಸ್ವಚ್ಛ ಅಭಿಯಾನವನ್ನೇ ಕೈಗೊಂಡಿದ್ದರು’ ಎಂದರು.