ಪತ್ರಕರ್ತ ಡಾ.ಶರಣು ಹುಲ್ಲೂರು ಬರೆದ, ಸಾವಣ್ಣ ಪ್ರಕಾಶನದ ‘ನೀನೇ ರಾಜಕುಮಾರ’ ಕೃತಿಯಲ್ಲಿ ಪುನೀತ್ ಬಾಲ್ಯವನ್ನು ಒಳಗೊಂಡ ‘ಲೋಹಿತ್ ಎಂಬ ಮರಿಮುದ್ದ’ ಅಧ್ಯಾಯವನ್ನು ಬಿ.ಕಾಂ ಪದವಿಯ ಮೂರನೇ ಸೆಮಿಸ್ಟರ್ನ ಕನ್ನಡ ಭಾಷಾ ಪಠ್ಯ ‘ವಾಣಿಜ್ಯ ಕನ್ನಡ 3’ಯಲ್ಲಿ ಸೇರಿಸಲಾಗಿದೆ. ಡಾ.ಮುನಿಯಪ್ಪ ಈ ಪಠ್ಯಪುಸ್ತಕದ ಪ್ರಧಾನ ಸಂಪಾದಕರು. ಡಾ.ಅಮರೇಂದ್ರ ಶೆಟ್ಟಿ, ಡಾ.ಕ.ನಿಂ. ಹೊಯ್ಸಳಾದಿತ್ಯ, ಡಾ.ಶಿವರಾಜ ಹಾಗೂ ಡಾ.ಬಿ.ಆರ್.ರಘುನಂದನ್ ಅವರು ಪಠ್ಯದ ಸಂಪಾದಕರು.