ಕಥೆ ವಿಭಾಗದಲ್ಲಿ ಜಯಶ್ರೀ ದೇಶಪಾಂಡೆ ಅವರ ‘ಉತ್ತರಾರ್ಧ’, ಕಾವ್ಯ ವಿಭಾಗದಲ್ಲಿ ವಿಭಾ ಪುರೋಹಿತ್ ಅವರ ‘ಬಾಲ್ಕನಿ ಕಂಡ ಕವಿತೆಗಳು’, ಕಾದಂಬರಿ ವಿಭಾಗದಲ್ಲಿ ದಾವಣಗೆರೆಯ ಪಾಪು ಗುರು ಅವರ ‘ಸೂಜಿ’, ಪ್ರಬಂಧ ವಿಭಾಗದಲ್ಲಿ ಮಡಿಕೇರಿಯ ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’, ಪ್ರವಾಸ ಪ್ರಬಂಧ ವಿಭಾಗದಲ್ಲಿ ಬೆಂಗಳೂರಿನ ಎಸ್.ಪಿ. ವಿಜಯಲಕ್ಷ್ಮಿ ಅವರ ‘ಸಾಗರದಾಚೆಯ ನಾಡಿನಲ್ಲಿ’ ಕೃತಿ ಆಯ್ಕೆಯಾಗಿದೆ.