ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ತಂಟೆಗೆ ಬಂದರೆ ಸುಟ್ಟು ಹೋಗ್ತೀರಿ: ಆರ್‌. ಅಶೋಕ

Last Updated 5 ಜೂನ್ 2022, 15:26 IST
ಅಕ್ಷರ ಗಾತ್ರ

ಬೆಂಗಳೂರು: ‘ನೀವೆಲ್ಲರೂ ಚುನಾವಣೆಗೆ ಹೋಗುತ್ತಿದ್ದೀರಿ, ಸ್ವಲ್ಪ ಹುಷಾರಾಗಿರಿ. ಆರ್‌ಎಸ್‌ಎಸ್‌ ತಂಟೆಗೆ ಬಂದರೆ ಸುಟ್ಟು ಹೋಗ್ತೀರಿ’ ಎಂದು ಕಂದಾಯ ಸಚಿವ ಆರ್‌. ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಎಚ್ಚರಿಕೆ ನೀಡಿದರು.

ಆರ್‌ಎಸ್‌ಎಸ್‌ ಚಡ್ಡಿ ಸುಡುವ ಆಂದೋಲನ ನಡೆಸುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿರುವ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಸಚಿವರು, ‘ಈ ರೀತಿ ಸುಡುವವರೆಲ್ಲ ಮನೆ ಸುಟ್ಟುಕೊಂಡಿದ್ದಾರೆ. ಆಂಜನೇಯನ ಬಾಲಕ್ಕೆ ಬೆಂಕಿ ಬಿದ್ದು, ಇಡೀ ಲಂಕೆಯೇ ಸುಟ್ಟು ಹೋಯಿತು. ಆರ್‌ಎಸ್‌ಎಸ್‌ ಶಕ್ತಿ ಏನು ಎಂಬುದು ಪ್ರಪಂಚಕ್ಕೆ ಗೊತ್ತಿದೆ’ ಎಂದರು.

‘ಪ್ಯಾಂಟ್‌, ಚಡ್ಡಿ ಸುಡೋದನ್ನೆಲ್ಲಾ ಬಿಡಿ. ನೀವು ಬಾದಾಮಿಯಲ್ಲಿ ಅತಿ ಕಡಿಮೆ ಅಂತರದಿಂದ ಗೆದ್ದಿದ್ದೀರಿ. ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕುತ್ತಿದ್ದೀರಿ. ಈಗ ಆರ್‌ಎಸ್‌ಎಸ್‌ ಕುರಿತು ಟೀಕೆ ಮಾಡಿದರೆ ಚುನಾವಣೆಯಲ್ಲಿ ಸೋಲುತ್ತೀರಿ. ಸೋನಿಯಾ ಗಾಂಧಿಯವರನ್ನು ಮೆಚ್ಚಿಸಲು ಹೇಳಿಕೆ ನೀಡಿ ಸುಟ್ಟು ಹೋಗಬೇಡಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT