‘ತುಂಗಭದ್ರಾ ನದಿ ನೀರು ಸಂಸ್ಕರಣೆ ಆಗುವ ರಾಂಪುರ ಶುದ್ಧೀಕರಣ ಘಟಕದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ 4 ಅಡಿಗಳಷ್ಟು ಹೂಳನ್ನು ಈಗಷ್ಟೆ ತೆರವು ಮಾಡಲಾಗಿದೆ.ಮೂರು ತಿಂಗಳಿಗೊಮ್ಮೆ ಸಂಸ್ಕರಣೆ ಘಟಕದ ಹೂಳು ತೆರವಾಗಬೇಕು. 20 ವರ್ಷಗಳಿಂದ ಅದರಲ್ಲಿ ಕೊಳಕು ಸಂಗ್ರಹವಾಗುತ್ತಿದ್ದು, ಅದೇ ನೀರು ಪೂರೈಕೆಯಾಗುತ್ತಿದೆ. ವಾಂತಿ ಭೇದಿ ಪ್ರಕರಣ ಉಲ್ಬಣಿಸಲು ಇದೇ ಕಾರಣ’ ಎಂದು ನಿವಾಸಿಗಳು ಹೇಳುತ್ತಾರೆ.