ದೇವನಹಳ್ಳಿ: ‘ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿ ಅವರದ್ದು ವಾಮಾಚಾರದ ಕುಟುಂಬ ಇರಬೇಕು. ಹಾಗಾಗಿಯೇ ಅವರು ಹೆಚ್ಚಾಗಿ ಸ್ಮಶಾನವನ್ನು ಪ್ರೀತಿಸುತ್ತಾರೆ’ ಎಂದು ಬಿಜೆಪಿಯ ರಾಜ್ಯಸಭಾ ಸದಸ್ಯ ಜಗ್ಗೇಶ್ ಟೀಕಿಸಿದ್ದಾರೆ.
‘ಅವರು ಹಿಂದೂ ಸಂಸ್ಕೃತಿ ಒಪ್ಪದಿದ್ದರೂ ಮಾಟ, ಮಂತ್ರ ಮಾಡುವವರು ಆಗಿರಬೇಕು. ಬಹುಸಂಖ್ಯಾತ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಅವರು ವರ್ತಿಸಿದ್ದಾರೆ. ಇಲ್ಲಿನ ಧರ್ಮಕ್ಕೆ ಅವರು ಗೌರವ ನೀಡಬೇಕು’ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.