ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ಷಾ ರಾಮಯ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಆಯ್ಕೆ

ಮೊಹಮ್ಮದ್ ನಲಪಾಡ್ ಫಲಿತಾಂಶಕ್ಕೆ ತಡೆ?
Last Updated 4 ಫೆಬ್ರುವರಿ 2021, 19:19 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಆರ್‌. ಸೀತಾರಾಂ ಅವರ ಪುತ್ರ ರಕ್ಷಾ ರಾಮಯ್ಯ ಮತ್ತು ಉಪಾಧ್ಯಕ್ಷರಾಗಿ ಎಚ್.ಎಸ್. ಮಂಜುನಾಥ್‌ ಆಯ್ಕೆಯಾಗಿದ್ದಾರೆ.

ಚುನಾವಣೆ ಯಲ್ಲಿ ರಕ್ಷಾ ರಾಮಯ್ಯ ಅವರಿಗೆ 56,271 ಮತಗಳು ಬಂದರೆ, ಎಚ್.ಎಸ್. ಮಂಜುನಾಥ್‌ಗೆ 18,137 ಮತಗಳು ಬಂದಿವೆ.ಇನ್ನೊಬ್ಬ ಅಭ್ಯರ್ಥಿ ಮೊಹಮ್ಮದ್‌ ನಲಪಾಡ್ ಅವರ ಫಲಿತಾಂಶವನ್ನೇ ತಡೆ ಹಿಡಿಯಲಾಗಿದೆ.

ಯುವ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 7 ಮಂದಿ ನಾಮಪತ್ರ ಸಲ್ಲಿಸಿ ದ್ದರು. ಕೊನೆಯ ಹಂತದಲ್ಲಿ ದಕ್ಷಿಣ ಕನ್ನಡದ ಯುವ ಮುಖಂಡ ಮಿಥುನ್‌ ರೈ ಕಣದಿಂದ ಹಿಂದೆ ಸರಿದಿದ್ದರು. ಕಣದಲ್ಲಿದ್ದವರ ಪೈಕಿ, ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್‌ ಅವರ ಪುತ್ರ ಮೊಹಮ್ಮದ್‌ ನಲಪಾಡ್‌, ಎನ್‌ಎಸ್‌ಯುಐ ಅಧ್ಯಕ್ಷ ಎಚ್.ಎಸ್. ಮಂಜುನಾಥ್ ಮತ್ತು ರಕ್ಷಾ ರಾಮಯ್ಯ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಯುವ ಕಾಂಗ್ರೆಸ್‌ ಚುನಾವಣೆಯನ್ನು ‘ಫೇಮ್‌’ ಸಂಸ್ಥೆ ನಡೆಸಿತ್ತು. ರಕ್ಷಾ ಅವರಿಗಿಂತ ನಲಪಾಡ್‌ ಹೆಚ್ಚು ಮತ ಗಳನ್ನು ಪಡೆದಿದ್ದರೂ, ಅವರ ವಿರುದ್ಧ ಪ್ರಕರಣಗಳಿರುವ ಕಾರಣಕ್ಕೆ ಎಐಸಿಸಿ ಅಮಾನತು ಮಾಡಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ. ಹೀಗಾಗಿ ಅವರ ಫಲಿತಾಂಶವನ್ನು ತಡೆಹಿಡಿದು, ಸ್ಪರ್ಧೆಯಿಂದಲೇ ವಜಾ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT