‘ನನಗಾದ ಅನ್ಯಾಯಕ್ಕೆ ನ್ಯಾಯ ಕೇಳಿ, ಒಂದು ವಿಡಿಯೊ ಮಾಡಿದ್ದೆ. ಅದನ್ನು ಕಮಿಷನರ್ ಕಚೇರಿ ಹಾಗೂ ಎಸ್ಐಟಿಯವರಿಗೆ ಮಾರ್ಚ್ 13ರಂದು ತಲುಪಿಸಿದ್ದೆ. ಅದರ ಮರುದಿನವೇ ತರಾತುರಿಯಲ್ಲಿ ರಮೇಶ ಜಾರಕಿಹೊಳಿ ದೂರು ಕೊಟ್ಟಿದ್ದಾರೆ. ಅದಾದ ಅರ್ಧ ಗಂಟೆಗೆ ನನ್ನ ವಿಡಿಯೊ ಹೊರಗೆ ಬಿಡಲಾಗಿದೆ. ಹಾಗಾದರೆ, ಎಸ್ಐಟಿ ಯಾರ ಪರವಿದೆ? ಇಲ್ಲಿ ಯಾರನ್ನು ರಕ್ಷಣೆ ಮಾಡಲಾಗುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಯುವತಿ ವಿಡಿಯೊದಲ್ಲಿ ಕೇಳಿದ್ದಾರೆ.