ಎರಡು ವರ್ಷಗಳಿಂದ ಕೋವಿಡ್ ನಿಂದಾಗಿ ಸಾಂಸ್ಕೃತಿಕ ಲೋಕ ನಿಷ್ಕ್ರಿಯವಾಗಿತ್ತು. ಕೋವಿಡ್ ಕಾರಣ ನೀಡಿ ಅಕಾಡೆಮಿಗಳು, ಸಂಘ–ಸಂಸ್ಥೆಗಳು, ರಂಗಾಯಣಗಳ ಅನು ದಾನಕ್ಕೆ ಕತ್ತರಿ ಹಾಕಲಾಗಿತ್ತು. ಈಗ ಸಹಜ ಸ್ಥಿತಿ ಮರಳಿದ್ದು, ಕಲಾ ಚಟುವಟಿಕೆಗಳೂ ಗರಿಗೆದರಿವೆ. ಆದರೆ, ಸಂಸ್ಕೃತಿ ಇಲಾಖೆಯು 2022–23ನೇ ಸಾಲಿನ ಸಹಾಯಾನುದಾನದಲ್ಲಿ ಭಾರಿ ಕಡಿತ ಮಾಡಿದೆ.