ಲಿಂಗಾಯತ, ಬೋವಿ ಸಮಾಜದ ಸ್ವಾಮೀಜಿಗಳು ಧ್ವನಿ ಎತ್ತಿದ್ದಾರೆ. ವಿವಿಧ ರೀತಿಯ ಆಮಿಷಗಳನ್ನು ಒಡ್ಡಿ ಮತಾಂತರ ಮಾಡಲಾಗುತ್ತಿದೆ. ಇದು ಕಾನೂನಿನ ಪ್ರಕಾರ ಅಪರಾಧ. ಯಾವುದೇ ಒಂದು ಧರ್ಮದ ತತ್ವಗಳನ್ನು ಆಳವಾಗಿ ತಿಳಿದು ಮತಾಂತರ ಆಗುವವವರ ಸಂಖ್ಯೆ ತೀರಾ ಕಡಿಮೆ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆಮಿಷ ಒಡ್ಡಿ ಮತಾಂತರ ಮಾಡುವವರನ್ನು ಗುರುತಿಸಿ ಮಟ್ಟ ಹಾಕಬೇಕು. ಸಮಾಜದ ವಿವಿಧ ಜಾತಿ ಸಮೀಕರಣದ ಚೌಕಟ್ಟನ್ನು ಒಡಯುವ ಕೆಲಸ ಆಗುತ್ತಿದೆ ಎಂದರು.