ಮ್ಯುಟೇಷನ್, ಭೂ ಪರಿವರ್ತನೆ, ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿನ ಪ್ರಕರಣಗಳ ವಿಲೇವಾರಿ, ಭೂಮಾಪನ ಅರ್ಜಿಗಳ ವಿಲೇವಾರಿ, ಪಹಣಿ ದೋಷ ತಿದ್ದುಪಡಿ, ಪಹಣಿಯಲ್ಲಿ ಬೆಳೆ ಕಾಲಂ ಸೇರಿದಂತೆ ವಿವಿಧ ಮಾಹಿತಿಗಳ ದಾಖಲಿಸುವ ಪ್ರಕ್ರಿಯೆಯಲ್ಲಿನ ಪ್ರಗತಿಯನ್ನು ಆಧರಿಸಿ ಈ ರ್ಯಾಂಕಿಂಗ್ ನೀಡಲಾಗಿದೆ ಎಂದು ಕಂದಾಯ ಇಲಾಖೆ ಭೂ ದಾಖಲೆಗಳ ಆಯುಕ್ತ ಮನೀಶ್ ಮೌದ್ಗಿಲ್ ತಿಳಿಸಿದ್ದಾರೆ.