ಆರ್ಎಸ್ಎಸ್ ಕುತಂತ್ರ ಈ ನೆಲದಲ್ಲಿ ನಡೆಯುದಿಲ್ಲ: ಹರಿಪ್ರಸಾದ್
ನಾನು ಸದಾ ಭಾಷೆ ಕಲಿಯುವ ವಿದ್ಯಾರ್ಥಿ. ಆರು ಭಾಷೆ ಮಾತನಾಡುತ್ತೇನೆ. ಹಲವು ಭಾಷೆಗಳನ್ನ ಅರ್ಥ ಮಾಡಿಕೊಳ್ಳುತ್ತೇನೆ. ಹಿಂದಿ ಸೇರಿದಂತೆ ಎಲ್ಲ ಭಾಷೆಯ ಮೇಲೆ ಗೌರವ ಇದೆ. ಹಾಗೇ ಹಿಂದಿಹೇರಿಕೆಯ ವಿರುದ್ಧ ನನ್ನ ಧಿಕ್ಕಾರವಿದೆ. ಭಾಷೆ ಹೇರಿಕೆಯ ಹಿಂದಿನ ಆರ್ಎಸ್ಎಸ್ನ ಕುತಂತ್ರ, ಸಾವಿರಾರು ಭಾಷೆಗಳಿಗೆ ಜನ್ಮಕೊಟ್ಟ ಈ ನೆಲದಲ್ಲಿ ನಡೆಯುದಿಲ್ಲ ಎಂದು ವಿಧಾನ ಪರಿಷತ್ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.