ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನಕಾರ್ಯದರ್ಶಿಯಾಗಿ ದಕ್ಷಿಣ ಕನ್ನಡ ಮೂಲದ ಆರ್ಎಸ್ಎಸ್ ಕಾರ್ಯಕರ್ತ ಹಾಗೂತುಮಕೂರು ವಿಭಾಗದ ಪ್ರಚಾರಕರಾಗಿದ್ದ ರಾಜೇಶ್ ಜಿ.ವಿಅವರನ್ನು ನಿಯೂಕ್ತಿಗೊಳಿಸಿ ಗುರುವಾರ ಆದೇಶಿಸಲಾಗಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ಕರ್ನಾಟಕ ಉಸ್ತುವಾರಿಅರುಣ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
ಈ ಮೊದಲು ಬಿಜೆಪಿ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಯಾಗಿದ್ದ ಅರುಣ್ ಕುಮಾರ್ ಅವರನ್ನು ಆರ್ಎಸ್ಎಸ್ಗೆ ಮರು ನಿಯುಕ್ತಿ ಮಾಡಲಾಗಿದೆ.
ರಾಷ್ಟ್ರೋತ್ಥಾನ ಪರಿಷತ್ನಲ್ಲಿ ಮಂಗಳವಾರ ನಡೆದ ಆರ್ಎಸ್ಎಸ್ನ ಉತ್ತರ ಮತ್ತು ದಕ್ಷಿಣ ಪ್ರಾಂತಗಳ ಸಮನ್ವಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಅರುಣ್ ಸಿಂಗ್ ಅವರು ಅಧಿಕೃತಗೊಳಿಸಿದ್ದಾರೆ.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿ ಶ್ರೀ ರಾಜೇಶ್ ಜಿ. ವಿ. ಅವರು ನಿಯುಕ್ತಿಗೊಂಡಿದ್ದಾರೆ. pic.twitter.com/CyuAxpsKdy
ಈ ಮೂಲಕ ಕರ್ನಾಟಕ ಆರ್ಎಸ್ಎಸ್ ನಲ್ಲಿ ಐವರು ಪ್ರಚಾರಕರ ಜವಾಬ್ದಾರಿಯನ್ನು ಬದಲಿಸಲಾಗಿದೆ. ಅರುಣ್ಕುಮಾರ್ ಅವರನ್ನು ಆರು ವರ್ಷಗಳ ಹಿಂದೆ ಬಿಜೆಪಿ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.
ರಾಜಕೀಯ ಕ್ಷೇತ್ರಕ್ಕೆ (ಬಿಜೆಪಿ) ನಿಯೋಜನೆಗೊಂಡಿರುವ ರಾಜೇಶ್ ಅವರು ದಕ್ಷಿಣ ಕನ್ನಡದವರು. ಮೈಸೂರು ಜಿಲ್ಲಾಆರ್ಎಸ್ಎಸ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. 2021ರಲ್ಲಿ ತುಮಕೂರು ವಿಭಾಗದ ಪ್ರಚಾರಕರಾಗಿ ನಿಯುಕ್ತಿಯಾಗಿದ್ದರು.