ನಿವೃತ್ತಿಯ ನಂತರ ಶಿಕ್ಷಕರು ನಿವೃತ್ತಿ ವೇತನ, ಪರಿಹಾರ, ಪಿಂಚಣಿ ಪಡೆಯಲು ಲಂಚ ನೀಡಬೇಕು ಎನ್ನುವ ಆರೋಪಗಳಲ್ಲೂ ಹುರುಳಿಲ್ಲ. ನೌಕರರು ನಿವೃತ್ತಿಯಾಗುವ ಮೂರು ತಿಂಗಳ ಮೊದಲೇ ಮಹಾಲೇಖಪಾಲಕರಿಗೆ ವರದಿ ಸಲ್ಲಿಸಲಾಗಿರುತ್ತದೆ. ಶಿಸ್ತು ಪ್ರಕರಣ ಎದುರಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಯ ಪ್ರಕರಣಗಳು ಇತ್ಯರ್ಥವಾದ ನಂತರ ಅರ್ಜಿಗಳು ವಿಲೇವಾರಿಯಾಗುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.