ವರಾಹಿ ಮುಳುಗಡೆ ಪ್ರದೇಶದ ನಾಲೂರು ಭಾಗದ ಕೊರನಕೋಟೆ, ಕುಂಜಳ್ಳಿ, ಶುಂಠಿಹಕ್ಲು ವಿದ್ಯಾರ್ಥಿಗಳು 3ರಿಂದ 8 ಕಿ. ಮೀ. ನಡೆದು ಗಾರ್ಡರಗದ್ದೆ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುತ್ತಾರೆ. ಹೊಸನಗರ ತಾಲ್ಲೂಕಿನ ನೀರುತೊಟ್ಟಿಲು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳಿದ್ದು, ಅವರಲ್ಲಿ ಮೇಲುಸುಂಕದಿಂದ 10 ಮಂದಿ ನಿತ್ಯ 8 ಕಿ.ಮೀ ನಡೆದು ಬರುತ್ತಿದ್ದಾರೆ.