ಬೆಂಗಳೂರಿನ ಕುರುಬರಹಳ್ಳಿಯ ಧನಂಜಯ್ ಸಾಳಂಕೆ, ‘ಜನವರಿ ಕೊನೆಯ ವಾರದಲ್ಲಿ ವೈದ್ಯ ಕೀಯ ಶಿಕ್ಷಣ ಕ್ಕಾಗಿ ಉಕ್ರೇನ್ಗೆ ಹೋಗಿದ್ದೆ. ಗಡಿಯ 1.5 ಕಿ.ಮೀ ದೂರದಲ್ಲಿ ಕಾಲೇಜು ಇದ್ದಿದ್ದರಿಂದ ಯಾವುದೇ ರೀತಿಯ ತೊಂದರೆಯಾಗಲಿಲ್ಲ. ಗಡಿ ದಾಟಲು ಸಾಕಷ್ಟು ದೈಹಿಕ ಶ್ರಮಬೇಕಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಮಸ್ಯೆಯಾಯಿತು ಎಂದು ತಿಳಿಸಿದರು.
ಕೊಡಗಿನ ಗೋಣಿಕೊಪ್ಪದ ಅಲಿಶಾ ಸಯ್ಯದ್ ಅಲಿ, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ನಮ್ಮ ಸುರಕ್ಷತೆಗಾಗಿ ದುಡಿಯುತ್ತಿದ್ದಾರೆ ’ಎಂದರು.