ಉಕ್ರೇನ್ನಲ್ಲಿ ಸಿಲುಕಿದ್ದ ಭಾರತೀಯರನ್ನು ‘ಆಪರೇಷನ್ ಗಂಗಾ’ ಹೆಸರಿನ ಕಾರ್ಯಾಚರಣೆ ಅಡಿಯಲ್ಲಿ ದೇಶಕ್ಕೆ ಕರೆತರಲಾಗುತ್ತಿದೆ. ಐದು ವಿಮಾನಗಳು ಭಾನುವಾರ ದೆಹಲಿಗೆ ಬಂದಿಳಿದಿವೆ. ಅವುಗಳಲ್ಲಿ ಕರ್ನಾಟಕದ 72 ಮಂದಿ ಬಂದಿದ್ದಾರೆ. ಒಂದು ವಿಮಾನ ಮುಂಬೈಗೆ ಬಂದಿದ್ದು, ಅದರಲ್ಲಿ ರಾಜ್ಯದ ನಾಲ್ವರು ವಾಪಸಾಗಿದ್ದಾರೆ ಎಂದು ಉಕ್ರೇನ್ನಲ್ಲಿ ಸಿಲುಕಿರುವ ಕರ್ನಾಟಕದ ಜನರ ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಮನೋಜ್ ರಾಜನ್ ತಿಳಿಸಿದ್ದಾರೆ.