ಜಾನಪದ ಗಾಯಕ ಬಾನಂದೂರು ಕೆಂಪಯ್ಯ, ಸುಗಮ ಸಂಗೀತ ಗಾಯಕ ವೈ.ಕೆ. ಮುದ್ದುಕೃಷ್ಣ, ಲೇಖಕಿ ಲೀಲಾ ಸಂಪಿಗೆ, ಸುಗಮ ಸಂಗೀತ ಕಲಾವಿದೆ ರೋಹಿಣಿ ಮೋಹನ್, ಛಾಯಾಗ್ರಾಹಕ ಸಿರಿಗಂಧ ಶ್ರೀನಿವಾಸಮೂರ್ತಿ, ರಂಗಸಂಘಟಕ ಕೆ. ರೇವಣ್ಣ, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಹಾಗೂ ನಿರೂಪಕಿ ವತ್ಸಲಾ ಮೋಹನ್ ಅವರೂ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ₹ 25 ಸಾವಿರ ನಗದು ಹಾಗೂ ಫಲಕ ಒಳಗೊಂಡಿದೆ.