‘ಶ್ರೀಮಠದ ಡಾ.ಮಹಾಂತ ಸ್ವಾಮೀಜಿ ಆರಂಭಿಸಿದ್ದ ಮಹಾಂತ ಜೋಳಿಗೆ ಅಂದೋಲನದಿಂದ ಲಕ್ಷಾಂತರ ಜನರು ದುಶ್ಚಟಗಳನ್ನು ತೊರೆದಿದ್ದಾರೆ. ಮದ್ಯದ ಬಾಟಲಿ, ಬೀಡಿ, ಸಿಗರೇಟ್, ಗುಟ್ಕಾ, ತಂಬಾಕು ಪೊಟ್ಟಣಗಳನ್ನು ಭಿಕ್ಷೆ ಬೇಡಿ ಅವರು ಜೋಳಿಗೆಗೆ ಹಾಕಿಸಿಕೊಳ್ಳುತ್ತಿದ್ದರು. ಇದೇ ಸಂಪ್ರದಾಯ ಮುಂದುವರಿಸಿರುವ ಗುರುಮಹಾಂತ ಸ್ವಾಮೀಜಿ, ಸಾವಿರಾರು ಜನರನ್ನು ದುಶ್ಚಟ ಮುಕ್ತರನ್ನಾಗಿಸಿದ್ದಾರೆ. ಸ್ವಾಮೀಜಿಯವರ ಈ ಸೇವೆ ಅನನ್ಯ’ ಎಂದು ವಿವರಿಸಿದರು.