‘ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ...’ ಎಂಬ ಧ್ಯೇಯ ವಾಕ್ಯದಡಿ ನಾಟಕೋತ್ಸವ ಆಯೋಜಿಸಲಾಗಿದೆ. ನಿತ್ಯ ವಚನಗೀತೆ, ಚಿಂತನ, ವಿಚಾರ ಮಾಲಿಕೆ, ಕೃತಿ ಲೋಕಾರ್ಪಣೆ, ನಾಟಕ ಪ್ರದರ್ಶನ ಜರುಗಲಿವೆ. ನ.7ರಂದು ನಡೆಯುವ ಸಮಾರೋಪದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.