ಇಲ್ಲಿನ 6ನೇ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ ಕೋರ್ಟ್ ಮಂಗಳವಾರ ಆದೇಶಿಸಿತು. ಆರೋಪಿಗಳನ್ನು ವಶಕ್ಕೆ ಪಡೆದ ಸಿಐಡಿ ಅಧಿಕಾರಿಗಳು, ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಮಾಹಿತಿ ಪಡೆದರು. ಈ ನಡುವೆ, ಸಂತ್ರಸ್ತೆಯು ಸೋಮವಾರ ರಾತ್ರಿ ಇಲ್ಲಿನ ದೇವರಾಜ ಠಾಣೆಗೆ ದೂರು ನೀಡಿದ್ದಾರೆ. ದೇವರಾಜ ಮಾರುಕಟ್ಟೆ ಬಳಿ ನಿಲ್ಲಿಸಿದ್ದ ವಾಹನದಲ್ಲಿದ್ದ ಚೆಕ್ ಪುಸ್ತಕ ಕಳುವಾಗಿದೆ. ಆರೋಪಿ ರವಿ, ಸಹಚರ ಪ್ರಕಾಶ್ ಕಾರಣ ಎಂದು ದೂರಿದ್ದಾರೆ.