ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಜಿ.ಎನ್.ರಂಗನಾಥ ರಾವ್, ‘ಪತ್ನಿ ಸರಳಾ,ನನ್ನೆಲ್ಲಾ ಕೃತಿ ಹಾಗೂ ಬರಹಗಳ ಪ್ರಥಮ ವಿಮರ್ಶಕಿಯಾಗಿದ್ದಳು. ಹೊಸ ಲೇಖಕಿಯರನ್ನು ಪ್ರೋತ್ಸಾಹಿಸಬೇಕು. ಅವರ ಕೆಲಸ ಗುರುತಿಸಿ ಗೌರವಿಸಬೇಕು ಎಂದು ಒತ್ತಿ ಒತ್ತಿ ಹೇಳುತ್ತಿದ್ದಳು. ಹೀಗಾಗಿ ಆಕೆಯ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿದ್ದೇವೆ. ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಫಲಕ ಒಳಗೊಂಡಿರಲಿದೆ’ ಎಂದು ತಿಳಿಸಿದರು.