‘ಪ್ರಾಚೀನ ಭಾರತದಲ್ಲಿ ಭಾಸ್ಕರಾಚಾರ್ಯರಂತಹ ಸಾಧಕರುಗಳು ಜ್ಞಾನ ಜಗತ್ತಿಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ಇಂತಹ ಸಂಗತಿಗಳನ್ನು ನಾವು ಹೆಮ್ಮೆಯಿಂದ ಹೇಳೋಣ. ಆದರೆ, ನಮ್ಮ ಸಾಧನೆಗಳಲ್ಲದ ಸಂಶೋಧನೆಗಳನ್ನು ನಮ್ಮದೆಂದು ವೈಭವೀಕರಿಸುವುದು ಜ್ಞಾನ ಜಗತ್ತಿಗೆ ಮಾಡುವ ದೊಡ್ಡ ಮೋಸ. ಈ ಧೋರಣೆ ರಾಷ್ಟ್ರದ ಮೇಲೆ ಅಂಧಾಭಿಮಾನ ಸೃಷ್ಟಿಸುತ್ತದೆ’ ಎಂದು ಹೇಳಿದರು.