ಆಡಳಿತ ಪಕ್ಷದ ಕೆಲವು ನಾಯಕರು ಕರ್ಫ್ಯೂ ಹೇರಿರುವುದನ್ನು ವಿರೋಧಿಸಿದರೆ, ಕೆಲವರು ಅದರ ಪರವಾಗಿದ್ದಾರೆ. ವ್ಯಾಪಾರಿಗಳು. ಹೋಟೆಲ್ ಮಾಲೀಕರು, ವಿವಿಧ ಸಂಘಟನೆಗಳೂ ಇದನ್ನು ವಿರೋಧಿಸುತ್ತಿದ್ದಾರೆ. ಯಾರ ಮಾತು ಸತ್ಯ ಎಂಬುದು ಜನರಿಗೆ ಗೊತ್ತಾಗುತ್ತಿಲ್ಲ. ಬಿಜೆಪಿ ಮುಖಂಡರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.