‘ಕೋವಿಡ್ನಿಂದ ಮೃತಪಟ್ಟ ತಮ್ಮ ಹೆತ್ತವರನ್ನು ನೋಡಲು, ಶವಸಂಸ್ಕಾರ ನಡೆಯುವ ಸ್ಥಳಕ್ಕೆ ಬರಲು ಸ್ವತಃ ಮಕ್ಕಳೇ ಹಿಂದೇಟು ಹಾಕಿದ್ದನ್ನು ಕಣ್ಣಾರೆ ಕಂಡೆ. ಇದು ಮನಸ್ಸಿಗೆ ತುಂಬಾನೋವು ಉಂಟು ಮಾಡಿತು. ಹೀಗಾಗಿ, ಇಂಥ ಪ್ರಕರಣಗಳಲ್ಲಿ ಮುಂದೆ ನಿಂತು ಕೆಲಸ ಮಾಡಿದೆ. ಹಿಂದೂ, ಕ್ರಿಶ್ಚಿಯನ್ನರು, ಮುಸ್ಲಿಮರು ಎನ್ನದೇ ಶವಸಂಸ್ಕಾರದಲ್ಲಿ ಭಾಗಿಯಾದೆ’ ಎಂದು ಆಯೂಬ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.