’ಭಾಷೆ ಬಾರದೇ ಸಂಕಷ್ಟಕ್ಕೆ ಸಿಲುಕಿ ರೈಲು ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ನಮ್ಮ ಅಜ್ಜಿ ಶಿವಮ್ಮ ಅವರನ್ನು, ರಜೆ ನಿಮಿತ್ತ ಊರಿಗೆ ಹೊರಟು ನಿಂತಿದ್ದ ಗದುಗಿನ ನಿವಾಸಿ ಭಾರತೀಯ ಸೇನೆಯ ಯೋಧ ಮುದುಕುಯ್ಯ ಹಿರೇಮಠ ನೋಡಿದ್ದಾರೆ. ಆಕೆ ಉಟ್ಟಿದ್ದ ಇಳಕಲ್ ಸೀರೆಯಿಂದ ನಮ್ಮ ಭಾಗದವರೇ ಇರಬೇಕು ಎಂದು ಊಹಿಸಿ ಮಾತನಾಡಿಸಿದ್ದಾರೆ‘ ಎಂದು ಶಿವಮ್ಮ ಅವರ ಮೊಮ್ಮಗ ಶರಣಗೌಡ ಪಾಟೀಲ ’ಪ್ರಜಾವಾಣಿ‘ಗೆ ತಿಳಿಸಿದರು.