ಬಾಗಲಕೋಟೆ: ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನಕ್ಕೆ ಬರೀ ಮೂರು ಗುಂಪುಗಳು (ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ್) ಮಾತ್ರ ಸೆಣಸುತ್ತಿಲ್ಲ. ಬದಲಿಗೆ ನಾಲ್ಕನೆಯವರಾಗಿ ಶಾಮನೂರು ಶಿವಶಂಕರಪ್ಪ ಕೂಡ ಹಣಿಕಿ ಹಾಕುತ್ತಿದ್ದಾರೆ. ನನಗೆ 91 ವರ್ಷ. ಇನ್ನೂ 100 ಆಗಿಲ್ಲ. ಐದು ವರ್ಷ ಅಧಿಕಾರ ಮಾಡಲು ಏನೂ ತೊಂದರೆ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.