‘ನಂದಿನಿ ಬ್ರ್ಯಾಂಡ್ ಗುಣಮಟ್ಟದ ಹಾಲು. ನಮ್ಮ ನಾಡಿನ ಹೆಮ್ಮೆ. ಖಾಸಗಿ ಸಂಸ್ಥೆಗಳ ಹಾಲು ಖರೀದಿಸಲು ನಮಗೂ ಇಷ್ಟ ಇಲ್ಲ. ಆದರೆ, ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಲಾಗುತ್ತಿದೆ. ಬೇರೆ ರಾಜ್ಯಗಳಿಗೆ ಹಾಲು ಪೂರೈಕೆಯನ್ನು ಸ್ಥಗಿತಗೊಳಿಸಬೇಕು. ಆಗ ಇಲ್ಲಿಯೂ ಹಾಲು ಲಭ್ಯವಾಗುತ್ತದೆ. ಹೋಟೆಲ್ ಉದ್ಯಮಕ್ಕೆ ತೊಂದರೆಯಾಗದ ರೀತಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.