ಬೆಂಗಳೂರು: ಸಿಪಿಐ(ಎಂ) ಪಕ್ಷದ ಹಿರಿಯ ನಾಯಕ ಮಾರುತಿ ಮಾನ್ಪಡೆ ಅವರ ನಿಧನದಿಂದ ದುಃಖಿತನಾಗಿದ್ದೇನೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮ್ಮ ಇಡೀ ಬದುಕನ್ನೇ ರೈತರು, ಕಾರ್ಮಿಕರು, ಶೋಷಿತರ ಪರ ಹೋರಾಟಕ್ಕೆ ಮುಡಿಪಾಗಿಟ್ಟು ಅರ್ಥಪೂರ್ಣವಾಗಿ ಬದುಕಿದ ಕಾಮ್ರೆಡ್ ಮಾನ್ಪಡೆಯವರು ನನಗೂ ಆತ್ಮೀಯರಾಗಿದ್ದರು. ಅವರಿಗೆ ದುಃಖತಪ್ತ ವಿದಾಯ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ನಿಂದ ಬಳಲುತ್ತಿದ್ದ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ, ಹೋರಾಟಗಾರ ಮಾರುತಿ ಮಾನ್ಪಡೆ (65) ಮಂಗಳವಾರ ಬೆಳಿಗ್ಗೆ ನಿಧನರಾಗಿದ್ದರು.
ಕೋವಿಡ್ ದೃಢಪಟ್ಟಿದ್ದರಿಂದ ಒಂದು ದಿನ ಕಲಬುರ್ಗಿಯ ಜಿಮ್ಸ್ನಲ್ಲಿ ದಾಖಲಾಗಿದ್ದ ಅವರು, ಅ.5ರಂದು ಸೊಲ್ಲಾಪುರದ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದರು. ಮೂರು ದಿನಗಳಿಂದ ವೆಂಟಿಲೇಟರ್ನಲ್ಲಿ ಇದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.