ಕೆ.ಆರ್.ಪೇಟೆ: ‘ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹಾವು– ಮುಂಗುಸಿಯಾಗಿದ್ದು ಈ ಜನ್ಮದಲ್ಲಿ ಒಂದಾಗುವುದಿಲ್ಲ’ ಎಂದು ಸಚಿವ ಆರ್.ಅಶೋಕ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಅವರನ್ನು ಸಿದ್ದರಾಮಯ್ಯ ಬಲವಂತದಿಂದ ಆಲಿಂಗಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಹೇಳಿದ ಪಾಠ ಕೇಳಿದ್ದಾರೆ. ಜನರು ಕಷ್ಟದಲ್ಲಿದ್ದಾಗ ರಾಹುಲ್ ಗಾಂಧಿ ಮುಖಂಡರಿಗೆ ಬುದ್ಧಿ ಹೇಳಬೇಕಾಗಿತ್ತು’ ಎಂದರು.