ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರನ್ನು ಬೆಂಬಲಿಸಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿರುವುದನ್ನು ಕೇಳಿದ್ದೇನೆ. ಬಿಜೆಪಿಯವರು ಕೂಡ ದೇವೇಗೌಡರ ವಿರುದ್ಧ ಅಭ್ಯರ್ಥಿ ಹಾಕದಿರಲು ಮೊದಲು ನಿರ್ಧರಿಸಿದ್ದರು. ಅದಾದ ಬಳಿಕ ಕಾಂಗ್ರೆಸ್ನವರು ಅಭ್ಯರ್ಥಿ ಹಾಕದಿರಲು ನಿರ್ಧರಿಸಿದ್ದರಷ್ಟೆ. ಅಯ್ಯೋ ಪಾಪ ನಿಮ್ಮನ್ನು ಸೋಲಿಸಿಬಿಟ್ಟಿದ್ದೇವೆ, ಸಿದ್ದರಾಮಯ್ಯ ಅವರು ನಿಮ್ಮನ್ನು ತುಮಕೂರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲಿಸಿಬಿಟ್ಟಿದ್ದಾರೆ ಎಂದೇನು ಕಾಂಗ್ರೆಸ್ನವರು ಬಂದಿರಲಿಲ್ಲ. ಬಿಜೆಪಿ ನಡೆ ನೋಡಿ ಕಾಂಗ್ರೆಸ್ನವರು ನಿರ್ಧರಿಸಿದ್ದರು ಎಂದು ಪ್ರತಿಕ್ರಿಯಿಸಿದರು.