ಬೆಂಗಳೂರು: 'ತಾಲಿಬಾನ್' ಪದವು ಕರ್ನಾಟಕ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿ ಮಾತನಾಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಕೇಸರಿ ಮುಖಂಡರು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಟ್ವೀಟ್ ಮಾಡಿರುವ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್, 'ಕರ್ನಾಟಕ ರಾಜ್ಯದಲ್ಲಿ 'ತಾಲಿಬಾನಿ' ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆ ಆಗುತ್ತಿರುವುದನ್ನು ಕಂಡು ಅಫ್ಗಾನಿಸ್ತಾನದ ಮೂಲ ತಾಲಿಬಾನಿಗರಿಗೆ ತೀವ್ರ ಅಸಮಾಧಾನವಾದರೆ ಆಶ್ಚರ್ಯವಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.
'ಕರ್ನಾಟಕ ರಾಜ್ಯವೆಂದು' ಉಲ್ಲೇಖಿಸಿ ಟ್ವೀಟ್ ಮಾಡಿರುವ ಸುರೇಶ್ ಕುಮಾರ್ ನಡೆ ಮಾತ್ರ ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕದ ಎರಡೂ ಪಕ್ಷಗಳ ಮುಖಂಡರನ್ನು ಕುರಿತು ಈ ಟ್ವೀಟ್ ಮಾಡಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ.
ಕರ್ನಾಟಕ ರಾಜ್ಯದಲ್ಲಿ "ತಾಲಿಬಾನಿ" ಎಂಬ ಪದ ರಾಜಕೀಯವಾಗಿ ತೀವ್ರ ಬಳಕೆ ಯಾಗುತ್ತಿರುವುದನ್ನು ಕಂಡು ಆಫ್ಘಾನಿಸ್ತಾನದ ಮೂಲ ತಾಲಿಬಾನಿಗರಿಗೆ ತೀವ್ರ ಅಸಮಾಧಾನ ವಾದರೆ ಆಶ್ಚರ್ಯವಿಲ್ಲ!