ವಿಜಯಪುರದಿಂದ ಭಾನುವಾರ ನಸುಕಿನಲ್ಲಿ ಶ್ರೀಗಳ ಚಿತಾಭಸ್ಮ ಹೊತ್ತ ಅಲಂಕೃತ ವಿಶೇಷ ವಾಹನ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ಬರುತ್ತಿದ್ದಂತೆ ಭಕ್ತರು, ಗ್ರಾಮಸ್ಥರು ಸ್ವಾಗತಿಸಿದರು. ಕೃಷ್ಣಾ, ಮಲಪ್ರಭಾ ನದಿ ದಡದಲ್ಲಿ ಸಿದ್ಧೇಶ್ವರಶ್ರೀ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶೇಷ ದೋಣಿ ಮೂಲಕ ಬಸವಣ್ಣನ ಐಕ್ಯ ಮಂಟಪದ ಮುಂಭಾಗಕ್ಕೆ ಸಾಗಿ ಚಿತಾಭಸ್ಮವನ್ನು ನದಿಗೆ ವಿಸರ್ಜಿಸುತ್ತಿದ್ದಂತೆ ‘ಓಂ ನಮಃ ಶಿವಾಯ, ಸಿದ್ಧೇಶ್ವರ ಶ್ರೀಗಳಿಗೆ ಜಯವಾಗಲಿ’ ಎಂಬ ಘೋಷಣೆಗಳು ಮೊಳಗಿದವು. ನದಿಯ ದಡದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳು, ರಾಜಕಾರಣಿಗಳು, ಸಾವಿರಾರು ಭಕ್ತರು ಸೇರಿದ್ದರು.