ಕದಂಬ ಕಂಪನಿಯ ಸಿಇಒ ನಾಗರಾಜ ಭಟ್ ಅವರನ್ನು ಈ ಕುರಿತು ವಿಚಾರಿಸಿದಾಗ, ‘ಲಾಕ್ಡೌನ್ ಅವಧಿಯಲ್ಲಿ ದೇಶ–ವಿದೇಶಗಳಲ್ಲಿರುವ ಎಲ್ಲ ತಾರಾ ಹೋಟೆಲ್ಗಳು ಬಂದ್ ಆಗಿದ್ದವು. ಈ ದುಬಾರಿ ಸಿರಿಧಾನ್ಯವನ್ನು ಇಂತಹ
ಹೋಟೆಲ್ಗಳಲ್ಲಿ ಮಾತ್ರ ಬಳಕೆ ಮಾಡುತ್ತಿದ್ದಾರೆ. ದೇವದುರ್ಗದ ರೈತರಿಂದ ಮೊದಲು ಖರೀದಿಸಿರುವ ಸಿರಿಧಾನ್ಯ ಕೂಡಾ ಹಾಗೇ ಉಳಿದಿದೆ. ಕಂಪನಿಯೇ ಲಕ್ಷಾಂತರ ರೂಪಾಯಿ ನಷ್ಟದಲ್ಲಿದ್ದು, ರೈತರಿಂದ ಮತ್ತೆ ಸಿರಿಧಾನ್ಯ ಖರೀದಿಸುವುದಕ್ಕೆ ಆಗುತ್ತಿಲ್ಲ’ ಎಂದರು.